Saturday 9 April 2016

ಬಿಸಿಲ ಬೇಗೆ

ಚೈತ್ರ ಮಾಸ ಬಂದಿತೀಗ
ವನದ ಸೊಬಗ ನೋಡಿರಿ
ಬಿಸಿಲ ಬೇಗೆಯಿಂದ ಬಳಲಿ
ಮನವು ಕಳವಳಗೊಳುತಿಹೆ||ಪ||

ಹಳೆಯುಗವು ಕಳೆದು ಮತ್ತೆ
ಹೊಸ ಯುಗಕೆ ಕಾಲಿಡುತಿಹೆ
ಸಿಹಿ ಕಹಿಯನುಂಡು ಎಲ್ಲಾ
ನೋವು ನಲಿವಿನಲಿ ಕಳೆಯಬೇಕಾಗಿಹೆ||೧||

ಚಿಗುರು ಒಡೆದು ಮೊಗ್ಗು ಅರಳಿ
ಪರಿಮಳವ ಹರಡಲಿ
ತಂಪುಗಾಳಿ ಕಂಪ ಸೂಸಿ
ಮನಕೆ ಮುದವ ಗೊಳಿಸಲಿ ||2||

ಗಿರಿಯ ನವಿಲು ಗರಿಯ ಬಿಚ್ಚಿ
ಕೇಕೆ ಹಾಕಿ ನಲಿಯಲಿ
ಅದನು ಕಂಡು ನವಿಲ ಹಿಂಡು
ಹಿಗ್ಗಿ ಮಳೆಯ ಕರೆಯಲಿ ||೩||

-ನಳಿನಾಕ್ಷಿ ಗಣೇಶ್ ಹೆಗಡೆ

No comments:

Post a Comment