Sunday 22 March 2015

ಹೊಸ ವರುಷಕೆ ಹೊಸ ಕೃತಿ



ಹೊಸ ವರುಷಕೆ ಹೊಸ ಕೃತಿಯನು ರಚಿಸಿ
ಹಾಡುವೆ ನಾನು ಮುದದಿಂದ,ಎಲ್ಲರು ಕೇಳಿ
ಹೇಗಿಹುದೆದು ಹೇಳಿರಿ ನನಗೆ ಒಲವಿಂದ
ನೀವ್ ಹೇಳಿದರೆ ನನಗೆ ಆನಂದ.

ಮನುಜರ ಬಾಳಲಿ ಏನಿಹುದೆಂದು
ಆಸೆಯ ಪಡುವಿರಿ ನೀವೆಲ್ಲ
ನೀರ ಮೇಲಿನ ಗುಳ್ಳೆಯಂತೆ
ತಿಳಿದು ಬಾಳಿರಿ ಜನರೆಲ್ಲ.

ಮೈಯಲಿ ಬಿಸಿ ಬಿಸಿ ರಕ್ತ ಹರಿವಾಗ
ಒಬ್ಬರಿಗಿನ್ನೊಬ್ಬರ ಹಂಗೇಕೆ
ರಟ್ಟೆಯ ಬಲವು ಕುಸಿದಿರುವಾಗ
ಒಬ್ಬರಿಗೊಬ್ಬರು ಬೇಕೇಬೇಕು.

ಭೂಮಿ ಮೇಲಿರುವಷ್ಟು ದಿವಸ
ಪ್ರೀತಿ ಪ್ರೇಮದೊಳಿರಿ ಎಲ್ಲ
ಬದುಕಿರುವಷ್ಟು ದಿನ ಒಳ್ಳೆಯ ಹೆಸರನು 
ಉಳಿಸಿ ಬಾಳಿರಿ ಜನರೆಲ್ಲ.

ಎಲ್ಲರ ಬಡಿದು ಕೊಳ್ಳೆಯ ಹೊಡೆದು
ಏನನು ದೋಚಿಕೊಂಡೋಹದಿರಿ
ಬೆವರನು ಸುರಿಸಿ ಎಲ್ಲರು ದುಡಿದು
ತಿಂದು ಬದುಕಿರಿ ಜನರೆಲ್ಲ.

                               -ನಳಿನಾಕ್ಷಿ ಹೀನಗಾರ್

No comments:

Post a Comment