ಶಾಂತರಾಗಿ ಬಾಳಿರಿನ್ನು
ಜಗದ ಮನುಜರೆಲ್ಲರೂ
ಬಿಸಿಯ ರಕ್ತ ಕುದಿಯಗೊಡದೆ
ನೋಡಿ ಕೊಳ್ಳಿರೆಲ್ಲರು.
ದ್ವೇಷ ಮತ್ಸರಗಳನು ಬೆಳೆಸಿ
ಯಾರು ಬದುಕ ಬೇಡಿರಿ
ಪ್ರೀತಿ ಪ್ರೇಮದಿಂದ ಕೂಡಿ
ಸಂತೋಷದಿಂದ ಬಾಳಿರಿ.
ಬೆಳೆವ ಮಕ್ಕಳೆಲ್ಲ ಇನ್ನು
ನಿಯತ್ತಿನಿಂದ ದುಡಿಯಿರ
ಎಲ್ಲರೂ ಒಗ್ಗೂಡಿ ತುತ್ತು
ಅನ್ನ ಹಂಚಿ ತಿನ್ನಿರಿ.
ತಮ್ಮ ತಮ್ಮ ಜಾತಿ ಧರ್ಮ
ಬಿಟ್ಟು ಯಾರು ತೊಲಗಬೇಡಿರಿ
ಒಳ್ಳೆ ಮಾರ್ಗವ ಹಿಡಿದು ಇನ್ನು
ಬದುಕಿ ಬಾಳಿ ನಡೆಯಿರಿ.
ಸತ್ಯ ಸಹನೆ ನೀತಿಮಾರ್ಗ
ತೋರೆಯದೆಂದು ಬಾಳಿರಿ
ನಡೆಯುತಿರಲು ಬದುಕು ಬೆಳಗ
ಲಿಹುದು ಜೀವ ಪಥದಲಿ.
-ನಳಿನಾಕ್ಷಿ ಹೀನಗಾರ್
No comments:
Post a Comment