(ವಿಶ್ವ ಕನ್ನಡಿಗ ನ್ಯೂಸ್ ನಲ್ಲಿ ಪ್ರಕಟವಾದ ಕವಿತೆ)
ಮಾತು ನಯವಾಗಿರಬೇಕು
ಊಟ ಸವಿಯಾಗಿರಬೇಕು
ನೋಟ ಸೊಗಸಾಗಿರಬೇಕು
ಎಲ್ಲರು ಪ್ರೀತಿಯೊಳಿರ ಬೇಕು.
ಮನೆಯೊಳು ಎಲ್ಲರು ಕೂಡಿರಬೇಕು
ಜಗಳವ ಮಾಡದೆ ನಗುತಿರಬೇಕು
ಪ್ರೀತಿಯ ಹಂಚಿ ನಲಿತಿರಬೇಕು
ಮನದೊಳು ಶಾಂತಿ ತುಂಬಿರಬೇಕು
ಎಲ್ಲರು ಸೇರಿ ದುಡಿಯಲೇ ಬೇಕು
ದುಡಿದು ಎಲ್ಲರು ಉಣ್ಣಲೇ ಬೇಕು
ಉಂಡು ಎಲ್ಲರು ಬದುಕಿರಬೇಕು
ಎಲ್ಲರು ನಗುತ ಬಾಳಲೇ ಬೇಕು.
ಹೆಣ್ಣು ನಾರಿ ಯಾಗಿರಬೇಕು
ಮನೆಯೊಳು ಹೂ ಹಣ್ಣಾಗಿರಬೇಕು
ನಾವೆಲ್ಲರು ಒಂದೆಂದು ತಿಳಿದಿರಬೇಕು
ತನ್ನಂತೆ ಪರರೆಂದು ಭಾವಿಸಬೇಕು.
-ನಳಿನಾಕ್ಷಿ ಹೀನಗಾರ್
ಮಾತು ನಯವಾಗಿರಬೇಕು
ಊಟ ಸವಿಯಾಗಿರಬೇಕು
ನೋಟ ಸೊಗಸಾಗಿರಬೇಕು
ಎಲ್ಲರು ಪ್ರೀತಿಯೊಳಿರ ಬೇಕು.
ಮನೆಯೊಳು ಎಲ್ಲರು ಕೂಡಿರಬೇಕು
ಜಗಳವ ಮಾಡದೆ ನಗುತಿರಬೇಕು
ಪ್ರೀತಿಯ ಹಂಚಿ ನಲಿತಿರಬೇಕು
ಮನದೊಳು ಶಾಂತಿ ತುಂಬಿರಬೇಕು
ಎಲ್ಲರು ಸೇರಿ ದುಡಿಯಲೇ ಬೇಕು
ದುಡಿದು ಎಲ್ಲರು ಉಣ್ಣಲೇ ಬೇಕು
ಉಂಡು ಎಲ್ಲರು ಬದುಕಿರಬೇಕು
ಎಲ್ಲರು ನಗುತ ಬಾಳಲೇ ಬೇಕು.
ಹೆಣ್ಣು ನಾರಿ ಯಾಗಿರಬೇಕು
ಮನೆಯೊಳು ಹೂ ಹಣ್ಣಾಗಿರಬೇಕು
ನಾವೆಲ್ಲರು ಒಂದೆಂದು ತಿಳಿದಿರಬೇಕು
ತನ್ನಂತೆ ಪರರೆಂದು ಭಾವಿಸಬೇಕು.
-ನಳಿನಾಕ್ಷಿ ಹೀನಗಾರ್
No comments:
Post a Comment